ಉರಿ ಬಿಸಲಲಿ
ಸುಡು ಕೆಂಡವ ಹೆಕ್ಕಿ
ಒಡಲ ಮಡಿಲಿಗೆ ತುಂಬಿಕೊಂಡು
ಭುವಿಯ ಧಗೆ ಸಣ್ಣದಾಗಿಸಲು
ನಾನು ಪಾತ್ರದಾರಿಯಾಗಿರುವೆ.
Saturday 18 December, 2010
Friday 24 September, 2010
ಇಳೆಗೆ ಚಿಗುರು
ಮಲ್ಲಿಗೆಯ ಬಳ್ಳಿಯ ತವಕ
ರಂಬೆ ಕೊಂಬೆಗಳನು ಸುತ್ತಿ
ಕಣ್ತೆರೆದು
ಅಣಕಿಸುವ ಬೆಳಕಿಗೆ ಬೆಳಕನು
ಆಸರೆಗೆ ತಂಪನು ನೀಡುತ
ಮುಡಿಯನೇರಿ ಸೂಸಿ
ತಾ ಪಡೆದ ಕ್ಷಣದ ಸುಖದಿ
ಕೆಚ್ಚಲ ಹಾಲು ತುಂಬಿ
ಕರುಳ ಬಳ್ಳಿಯು
ಹೊರ ಬರಲು ತವಕಿಸುತ್ತಿದೆ
ರಂಬೆ ಕೊಂಬೆಗಳನು ಸುತ್ತಿ
ಕಣ್ತೆರೆದು
ಅಣಕಿಸುವ ಬೆಳಕಿಗೆ ಬೆಳಕನು
ಆಸರೆಗೆ ತಂಪನು ನೀಡುತ
ಮುಡಿಯನೇರಿ ಸೂಸಿ
ತಾ ಪಡೆದ ಕ್ಷಣದ ಸುಖದಿ
ಕೆಚ್ಚಲ ಹಾಲು ತುಂಬಿ
ಕರುಳ ಬಳ್ಳಿಯು
ಹೊರ ಬರಲು ತವಕಿಸುತ್ತಿದೆ
Friday 17 September, 2010
ರಕ್ಕೆ ಹೂವು-ನಗೆ ಬುಗ್ಗೆ
ರಕ್ಕೆ ಹೂವು
ನನ್ನವಳ ಸೆಳೆತಕೆ ಸಿಕ್ಕಾಗ
ನನ್ನುಸಿರ ಬಸಿದು ನೀರೆರದೆ
ತನು ತುಂಬಿ ಅರಳಿ
ದುಂಬಿಯ ಸೆಳತಕೆ ಮರುಳಾಗಿ
ಹಾರಿಹೋದಳು
ನಗೆ ಬುಗ್ಗೆ
ಕಲ್ಪನೆಗೂ ಸಿಗದೆ
ಮರೆಯಾಗುತ್ತಿದ್ದ ತೊರೆಯು
ನಿನ್ನ ನಗುವಿಗೆ
ದುಮ್ಮುಕ್ಕಿ ಹರಿಯಿತು.
ನನ್ನವಳ ಸೆಳೆತಕೆ ಸಿಕ್ಕಾಗ
ನನ್ನುಸಿರ ಬಸಿದು ನೀರೆರದೆ
ತನು ತುಂಬಿ ಅರಳಿ
ದುಂಬಿಯ ಸೆಳತಕೆ ಮರುಳಾಗಿ
ಹಾರಿಹೋದಳು
ನಗೆ ಬುಗ್ಗೆ
ಕಲ್ಪನೆಗೂ ಸಿಗದೆ
ಮರೆಯಾಗುತ್ತಿದ್ದ ತೊರೆಯು
ನಿನ್ನ ನಗುವಿಗೆ
ದುಮ್ಮುಕ್ಕಿ ಹರಿಯಿತು.
Monday 13 September, 2010
ಬುಡಬುಡಕೆ
Saturday 4 September, 2010
ನಿಶಬ್ಧ ಬೆಳಕು
ನನ್ನ ಒಲವನು
ಒಡೆದ ಮಡಿಕೆ ಎಂದರು.
ನೆರೆ ಮನೆಯಲಿ
ಮೊಟ್ಟೆ ಇಟ್ಟ ಹಕ್ಕಿ ಎಂದರು.
ಹಣ್ಣಿಲ್ಲದ ಮರದಂತೆ
ನೀ.. ಬಂಜೆ ಎಂದರೂ...
ನೆರಳಿನ
ಮಧುರ ಪ್ರೀತಿ
ಮರೆಯಾಗುವುದೆ ?
ಒಡೆದ ಮಡಿಕೆ ಎಂದರು.
ನೆರೆ ಮನೆಯಲಿ
ಮೊಟ್ಟೆ ಇಟ್ಟ ಹಕ್ಕಿ ಎಂದರು.
ಹಣ್ಣಿಲ್ಲದ ಮರದಂತೆ
ನೀ.. ಬಂಜೆ ಎಂದರೂ...
ನೆರಳಿನ
ಮಧುರ ಪ್ರೀತಿ
ಮರೆಯಾಗುವುದೆ ?
Saturday 28 August, 2010
ಭುವಿಯ ಒಡಲ ಕೂಗು
ಜಗವೆಲ್ಲ ತುಂಬಿಹುವುದು
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
Tuesday 17 August, 2010
ಮಮತೆಯ ಮರೆತವರು
Saturday 7 August, 2010
ದುಗುಡದ ಮನ
ಜೋಡಿ ಎತ್ತುಗಳು
ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ
ಅವು ನನ್ನ ತಿವಿಯುವುದಿಲ್ಲವೆಂದು ?
ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ
ನಾ ಹೇಗೆ ತಿಳಿಯಲಿ
ಅವು ಮತ್ತೆ ಗೂಡು ಸೇರುತ್ತೇವೆಂದು ?
ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ
ನಾ ಹೇಗೆ ತಿಳಿಯಲಿ
ನಾ ಮತ್ತೆ ಬದುಕುತ್ತೇನೆಂದು ?
ದುಗುಡದ ಮನವೆ ದೂರವಾಗು ನನ್ನಿಂದ
ದೃಡನಾಗುವೆ ನಾ ಮಸಣದಲ್ಲೂ............
ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ
ಅವು ನನ್ನ ತಿವಿಯುವುದಿಲ್ಲವೆಂದು ?
ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ
ನಾ ಹೇಗೆ ತಿಳಿಯಲಿ
ಅವು ಮತ್ತೆ ಗೂಡು ಸೇರುತ್ತೇವೆಂದು ?
ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ
ನಾ ಹೇಗೆ ತಿಳಿಯಲಿ
ನಾ ಮತ್ತೆ ಬದುಕುತ್ತೇನೆಂದು ?
ದುಗುಡದ ಮನವೆ ದೂರವಾಗು ನನ್ನಿಂದ
ದೃಡನಾಗುವೆ ನಾ ಮಸಣದಲ್ಲೂ............
Saturday 31 July, 2010
ಕೆಂಪು ಕುಂಚ
ನಿನ್ನ ದ್ಯೇಯಗಳ ನಿರ್ಣಯ
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
Saturday 24 July, 2010
ತಣಿಸು ಜೀವಾತ್ಮವ
ಸನಿಹವಾದಾಗ
ಮಾತು
ಹೊರಹೊಮ್ಮಿ
ಮನ್ನಿಸು ಎನ್ನುವಷ್ಟರಲ್ಲಿ
ನನಗಾದ ನೋವು
ನಿನ್ನದಲ್ಲವೆನ್ನುತ
ಮರು ಮಾತಾಡದೆ
ಬಾನಾಡಿಗಳ ದಣಿವಿನ ದಾಹವ ತೀರಿಸಿ
ಮರೆಯಾದಳು
Saturday 17 July, 2010
ಪಟ್ಟ ಭದ್ರ
Friday 9 July, 2010
ಕೆಡವಿ ತಾರತಮ್ಯವ
ಜಾತಿ ಮತದ
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
ವಿಷ ಬೀಜ
ಆಂತರ್ಯಕ್ಕೆ ಬಿತ್ತಿ
ರಾಜ್ಯ ಕಟ್ಟಿ
ಅರಸನಾಗಿ ಆಳಿದವನು
ಕೋಮು ಗಲಭೆಯ
ಕಳೆಯೊಳಗೆ ಸಿಲುಕಿ
ಕಾಲವಾದಾಗ
ಊರೂರ ಹಸಿರು ಸಿರಿಯಾಡುವುದು.
Saturday 26 June, 2010
ಬಿಚ್ಚೋಲೆ
Saturday 19 June, 2010
ಮಣ್ಣೆಂಟೆಯೊಳು ತೆನೆ ಪೈರು
ಬಡತನದ ದೀವಿಗೆಯ ಹೊತ್ತು
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
Friday 11 June, 2010
ಕಾಲವನ್ನು ಸರಿಸಿ
ಕರಗಿದ ಮುತ್ತು
ಒಗ್ಗೂಡಿ
ಮರು ಹುಟ್ಟು.
ನೋವು ಹುದುಗಿಸಿಟ್ಟು
ಅವಳಿಗಾಗಿ ಕಾಯುವ ಕಾಲ
ನನ್ನ ಮುಂದೆ ನಶ್ವರ
Saturday 5 June, 2010
ಕೃತಿಗೆ ಸಿಗದ ಪ್ರಕೃತಿ
ಅರೆ ಬರೆ ಅಕ್ಷರವ ಗೀಚುತ
ಮಾರುದ್ದ ಮಾಲೆಯ ತೂಗಿಕೊಂಡು
ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,
ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ
ಓರೆ-ಕೋರೆಗಳನು ತಿದ್ದಲೊರಟು
ಪಾಪ ಪರಿವರ್ತನೆಯೆಂಬ
ಮೂಡನಂಬಿಕೆಗೆ ಸೆಣೆದು
ಪರಲೋಕ ಕಲ್ಯಾಣಕ್ಕಾಗಿ ಗದ್ದುಗೆಯೊಳಗಿಳಿದು
ಅಸ್ಪ್ರುಶ್ಯತೆಗೆ ಜನ್ಮ ನೀಡಿ
ಜಗವೆಲ್ಲ ನನ್ನದೆನ್ನುವವನ
ಬುದ್ದಿಯೊಳ ಬುದ್ದಿಯನು
ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ
Friday 28 May, 2010
ಬಿಕ್ಕು ಬಿಮ್ಮು - ಸಂಪ್ರದಾಯ
ಹುಟ್ಟು ಪರಂಪರೆಯ
ಪಟಿಸುತ ಹೊಗಳಿಕೊಳ್ಳುವುದರಲ್ಲೇ
ಮುಳಿಗಿದವನು
ಪಟಿಸುತ ಹೊಗಳಿಕೊಳ್ಳುವುದರಲ್ಲೇ
ಮುಳಿಗಿದವನು
ತನ್ನ ಸುತ್ತಲ ಪರಿಸರವ ಮರೆತು
ಬದುಕನ್ನೇ ಕಳೆದುಕೊಂಡನು
ಬಿಕ್ಕು ಬಿಮ್ಮು
ಜೈಲು ಹಕ್ಕಿ
ಹಾರಿ ಹೋದರು
ಬಿಡುಗಡೆಯ ಕನಸು ಕಂಡ
ಕಂಬಿಗಳು ಬಂಧಿಯಾಗಿ
ಬಿಕ್ಕಳಿಸಿ
ಬರುವ ಅಥಿತಿಗೆ ಸ್ವಾಗತಿಸುತ್ತಿವೆ
Tuesday 25 May, 2010
Monday 17 May, 2010
ಚಂದಗಾಣು
ಬೇರು ನಾ
ಹಸಿರಿನ ಚಿಗುರು
ನೆರಳ ಉಡುಗೆಯ ತೊಟ್ಟು
ನೊಂದ ಹೃದಯಗಳಿಗೆ
ಆಸರೆಯ ನೀಡಿ
ಸುರಿದ ಮಳೆಗೆ
ಮನಸ್ಸುಗಳೆರಡು ತಿಳಿಗೊಂಡು
ಕಂಡುಕೊಂಡ ದಾರಿಯೆ
ನನ್ನ ನಿನ್ನಯ ಇಂದಿನ ಬದುಕು
Saturday 15 May, 2010
ಕನವರಿಕೆಯ ನಿಗಿ
ಸುಡುಕೆಂಡವು
ಅಲೆಗಳನ್ನೇರಿ ಸುನಾಮಿಯಂತೆ
ಅತೀ ವೇಗದ ಕೆನ್ನಾಲಿಗೆಯು
ಇಡೀ ದ್ವೀಪವನ್ನೇ ಆವರಿಸಿ
ಬೆಂಕಿ ಉಂಡೆಯಾಗಿ ಹಾರಿ
ನಮ್ಮೂರ ಕಾಡನು ಸುಟ್ಟು
ಜ್ವಾಲೆಯು ಛಾವಣಿಗೆ ತಾಕಿದೆಂದು
ಹೆದರಿ ಎಚ್ಚರಗೊಂಡಾಗ
ಅಜ್ಜವ್ವ ನಿರೋಲೆಗೆ ಬೆಂಕಿಯಂಟಿಸಿ
ಬೆಚ್ಚಗೆ
ಕೈ ಕಾಯಿಸುತ್ತಿದ್ದನ್ನು ಕಂಡು
ಕನಸು ಕನಸಾಗಿಯೇ ಉಳಿಯಲೆನ್ನುತ
ಅವ್ವನ ಮಡಿಲಲಿ ನಿದ್ರೆಗೆ ಜಾರಿದೆ.
Thursday 13 May, 2010
ಹೂ ಮಡಕೆಯ ಜೋಗಿ ಪದ
ಬೆತ್ತಲೆ ಭೂಮಿಯೊಳಗಿಳಿದಾಗ
ಇಬ್ಬನಿಯ ಮಡಿಲು ಸೇರಿ
ಬೆಳಕ ತುಣುಕಿನ ದಾಹವ ತೀರಿಸಿ
ಮರೆಯಾಗುವುದರೊಳಗೆ
ಮಾಗಿಯ ಬಳ್ಳಿ ಕವಲೊಡೆದು
ಅರಳುವ ಹೂ ತಂಬೂರಿಯಾಗಿ
ಮಠ ಸೇರಿ
ಮೀಟಿದ ನಾದಕೆ
ಸಾಲು ಮಡಕೆಗಳ ಕನಸು ಚೂರಾಗಿ
ತನ್ನೊಡಲ ನೀರ ಹನಿಗಳು
ಜೋಗಯ್ಯನ ಪದಗಳಿಗೆ ತಲೆದೂಗಿ ತಾಳವಾದವು
Monday 10 May, 2010
ಹಸಿವಿಗೆ ಅಲೆದ
ಇರುವೆಗಳು
ಬೆಲ್ಲವಿಟ್ಟಾಗ ಬರದೆ
ಬೇವಿಟ್ಟಾಗ ಮುತ್ತಿಕೊಂಡವು
ಆಗಸಕ್ಕೆ ರೆಕ್ಕೆ
ಚಿಗುರು ನೀನಲ್ಲ
ಮಳೆಯು ನಾನಲ್ಲ
ಉದುರಿದ ತರಗಲೆಗಳು
ಚಿಗುರೋಡೆಯಲು ತವಕಿಸುತ್ತಿವೆ
ಕರಗುವ ಮುನ್ನ
ಮನವು ಹಗುರಾಗಲೆಂದು
ಅಧಿಕಾರಶಾಹಿ
ಹಣ್ಣಾದ ಎಲೆಗಳು
ಉದುರಿದಾಗ
ಚಿಗುರೆಲೆಯ ನೋಡಿ
ಮರಕೆ ಕೊಡಲಿ ಇಟ್ಟವು
Liquid beef
ಗೋ ಹತ್ಯೆ ನಿಷೇಧವನ್ನು
ಪ್ರಸ್ತಾಪಿಸಿದಾಗ
ತನ್ನ ಕರುವು
ಕೆಚ್ಚಲನ್ನು ಹೀರಿಕೊಂಡು
ಜಾರಿಗೆ ತಂದಿತು.
ಇರುವೆಗಳು
ಬೆಲ್ಲವಿಟ್ಟಾಗ ಬರದೆ
ಬೇವಿಟ್ಟಾಗ ಮುತ್ತಿಕೊಂಡವು
ಆಗಸಕ್ಕೆ ರೆಕ್ಕೆ
ಚಿಗುರು ನೀನಲ್ಲ
ಮಳೆಯು ನಾನಲ್ಲ
ಉದುರಿದ ತರಗಲೆಗಳು
ಚಿಗುರೋಡೆಯಲು ತವಕಿಸುತ್ತಿವೆ
ಕರಗುವ ಮುನ್ನ
ಮನವು ಹಗುರಾಗಲೆಂದು
ಅಧಿಕಾರಶಾಹಿ
ಹಣ್ಣಾದ ಎಲೆಗಳು
ಉದುರಿದಾಗ
ಚಿಗುರೆಲೆಯ ನೋಡಿ
ಮರಕೆ ಕೊಡಲಿ ಇಟ್ಟವು
Liquid beef
ಗೋ ಹತ್ಯೆ ನಿಷೇಧವನ್ನು
ಪ್ರಸ್ತಾಪಿಸಿದಾಗ
ತನ್ನ ಕರುವು
ಕೆಚ್ಚಲನ್ನು ಹೀರಿಕೊಂಡು
ಜಾರಿಗೆ ತಂದಿತು.
Friday 30 April, 2010
Falling Star
ಕತ್ತಲೆಯು ಮಂಡಿಯೂರಿ
ನನ್ನ ಮಡದಿ ಬೆಳಕನ್ನು
ಹಿಂದಿಗಿರುಸುವಂತೆ
ಕೋರಿದಾಗ
ನಿನ್ನೊಳಗೆ
ಮಡದಿ ಇರುವಳೆಂದೇಳಿ
ಮರೆಯಾಗುವಾಗ
ಬೆಳದಿಂಗಳು ಮೂಡುತ್ತಿತ್ತು.
Wednesday 28 April, 2010
ಕತ್ತಲ ಬಿಂಬ
ಒಲವನು ಹಂಬಲಿಸಿ
ಹುಡುಕಲೊರಟು
ಕಡು ರಾತ್ರಿಯ ತಂಪಲಿ ಬೆಂದು
ಹಳ್ಳ - ಕೊಳ್ಳದಲಿ ತೆವಳಿ - ತೆವಳಿ
ಹೂ ದಾರಿಯ ಸವೆಸಿ
ಹಸಿದ ಕಂಗಳ ತಪ್ಪಿಸಿ
ಬಳ್ಳಿಯು ಮರವ ತಬ್ಬಿದಂತೆ
ಚಿಗುರು ಪ್ರೀತಿಯನು
ಹಿಡಿ ಹಿಪ್ಪೆಯಂತೆ ಹೊಸಕಿದಾಗ
ಕನಸುಹೊತ್ತ ಒಲವಿನ ಉಸಿರು ಮಡುಗಟ್ಟಿ
ಹಿಂದಿರುಗಲು
ದಾರಿಕಾಣದೆ ನಿಂತು
ಸುತ್ತುವರೆದ ಸುಂಟರಗಾಳಿಯ ಬೇಡುತಿಹಳು
ಅರಿವಿಲ್ಲದೆ ಸಿಲುಕಿರುವೆ
ಬಿಟ್ಟೋಗಬೇಡ ............ ನನ್ನೆತ್ತಿಕೋ ...........
ನಿನ್ನೊಡಲ ಸೇರಿಸಿ
ಹೊತ್ತೊಯ್ದುಬಿಡು ಅವನಿಲ್ಲದೆಡೆಗೆ.
Tuesday 27 April, 2010
ಭುವಿಗೆ ಶರಣು
ಮುನಿಸಿನಲ್ಲಿ
ಮಂಜಿನ ಹನಿಗಳಲಿ ಮೂಡಿ
ಬಿಸಿಲ ಬೇಗೆಯನು
ದಿಕ್ಕರಿಸಿ
ಕರಗದೆ ಹೂವಾಗಿ ಅರಳಿ
ಗಗನ ಚುಕ್ಕಿ
ಬರಚುಕ್ಕಿಯಾಗಿ
ಭುವಿಯಲ್ಲೇ ದುಮ್ಮುಕ್ಕಿದವು
Saturday 24 April, 2010
ಜಾಣ ಮರೆವು
ಕಗ್ಗತ್ತಲಲ್ಲಿ
ಮಿಣುಕು ಹುಳುವು ಪಳಿಸಿ
ಪ್ರಜ್ವಲಿಸಿದ ಬೆಳಕು
ನನ್ನವಳ ಮುಖಚರ್ಯೆಗೆ ನೆಸೆದಾಗ
ಮೂಡಿದ ಹೊಳಪಿಗೆ
ನಾಚಿ ತನ್ನ ಬೆಳಕನ್ನು ಮರೆಯಿತು
ಮಿಣುಕು ಹುಳುವು ಪಳಿಸಿ
ಪ್ರಜ್ವಲಿಸಿದ ಬೆಳಕು
ನನ್ನವಳ ಮುಖಚರ್ಯೆಗೆ ನೆಸೆದಾಗ
ಮೂಡಿದ ಹೊಳಪಿಗೆ
ನಾಚಿ ತನ್ನ ಬೆಳಕನ್ನು ಮರೆಯಿತು
Thursday 22 April, 2010
ಜೋಳಿಗೆ ತುಂಬಾ ಜೀವ ಜಲ
ಹಳೆಯದು ಕನಸಾಗಿ ಉಳಿಯುವಂತೆ
ಗಾಡಿ ಕಟ್ಟಿ ಊರ ಸುತ್ತಲೊರಡಬೇಕು
ಕವಲುದಾರಿ ಕೂಡುವಂತೆ
ಸೆಳತದಲಿ ಇರಬೇಕು
ನೀರ ಗುಳ್ಳೆ ಮರುಗದಂತೆ
ಜೊತೆಯಾಗಿರಬೇಕು
ಮನಸ್ಸು ಮಾಸದಂತೆ
ಅಸೆ ಆಕಾಂಕ್ಷೆಗಳನ್ನು ಬಿಟ್ಟು ನಡೆಯಬೇಕು
Tuesday 20 April, 2010
ತಿಳಿ ಬಣ್ಣದ ಹಕ್ಕಿ
Monday 19 April, 2010
ಪ್ರೀತಿ ಮೀಂಟುವ ಸೆಳೆತ
ಪ್ರೀತಿಯ ಹುಟ್ಟು
ಅವಳೊಲಿದ ಕ್ಷಣ
ಮುಗಿಲ ಮನವ ಗೆದ್ದಂತೆ
ನನ್ನೊಳಗೆ ಪರಿಮಳ
ಕಿರುನಗೆಯ ಕುಡಿನೋಟ
ಕಡು ಕತ್ತಲೆಯನು ಮೀಟಿ
ಒಡಲ ಕಣ್ಗಳ ಹೊಳಪಲಿ
ಮೂಡುತಿರುವ ಬೆಳದಿಂಗಳು
ಮುಂಜಾನೆಯ ಚುಮು ಚುಮು ಚಳಿ
ಚೆಲ್ಲಿದ ಎಳೆ ಬಿಸಿಲು
ಅರಳುತಿರುವ ಹೂವಿನ ಮುಗುಳ್ನಗೆಯು
ಸನಿಹಕೆ ಸೆಳೆದಂತಾಗುತಿದೆ
ಅವಳೊಲಿದ ಕ್ಷಣ
ಮುಗಿಲ ಮನವ ಗೆದ್ದಂತೆ
ನನ್ನೊಳಗೆ ಪರಿಮಳ
ಕಿರುನಗೆಯ ಕುಡಿನೋಟ
ಕಡು ಕತ್ತಲೆಯನು ಮೀಟಿ
ಒಡಲ ಕಣ್ಗಳ ಹೊಳಪಲಿ
ಮೂಡುತಿರುವ ಬೆಳದಿಂಗಳು
ಮುಂಜಾನೆಯ ಚುಮು ಚುಮು ಚಳಿ
ಚೆಲ್ಲಿದ ಎಳೆ ಬಿಸಿಲು
ಅರಳುತಿರುವ ಹೂವಿನ ಮುಗುಳ್ನಗೆಯು
ಸನಿಹಕೆ ಸೆಳೆದಂತಾಗುತಿದೆ
Thursday 15 April, 2010
ಕಣ್ಣರಳಿಸಿದಷ್ಟು ಮೈಮನ
ಸೆಳೆಯುವುದು
ಮುಟ್ಟಿದರು ಮಾಸುತಿದ್ದೆ.
ಮಾರೆತ್ತರಕೆ ಹಾರುತ್ತಿದ್ದೆ
ದೂರ ಸರಿದರು
ನನ್ನವನ ಸ್ಪರ್ಶಕೆ ಮನಸೋತೆ
ತೇಲಿ ಹಾರುವಾಗ
ಕಣ್ಮರೆಯಾಗಿ ಕಾಡಿದ
ಹಿಂತಿರುಗಿಲ್ಲ.
ಹುಡುಕಲೋರಟಾಗ ವಸಂತ ಕಾಲದ ಸನಿಹ
ಬುವಿಯೆಲ್ಲ ಹಸಿರ ಔತಣ
ಚಿಗುರನು ಸವಿದ ಕೋಗಿಲೆಯು ಇಂಪಾಗಿ ಹಾಡಿದಾಗ
ಮನಸ್ಸು ಬಿಗಿ-ಸಡಿಲದಲಿ ಕಂಪಿಸಿ
ಋತುಮತಿಯಾದ ಹೆಣ್ಣಾಗಿರುವೆ.
ನನ್ನವನೆಲ್ಲಿ..... ನನ್ನವನೆಲ್ಲಿ........
Friday 9 April, 2010
Tuesday 6 April, 2010
Monday 8 March, 2010
ಒಡೆದ ಮುತ್ತನು ಸುರಿದು
ಮಾತು ಮಾತಿಗೆ ಪೋಣಿಸಲು
ಹುರಿದುಂಬಿದ ಮನೆಯಲಿ
ಹನಿ ನೀರಿಗೂ ಬರಗಾಲ
ಕರಿಮಣಿಯ ಕಿತ್ತೊಗೆದ ಮಧುಮಗಳ ಬಾಳು
ಎಣ್ಣೆ ಇಲ್ಲದ ದೀಪವು ಬರ ಬರನೆ ಉರಿದು
ಮನಸ್ಸಿಲ್ಲ ಮಂಚದಲಿ ಮಲ್ಲಿಗೆಯ ಹಾಸಿ
ಕರಗುವ ಮುತ್ತು ಒಂದೆಡೆ ಸೇರಿ
ಕಣ್ಣಂಚಿನ ಕಾಡಿಗೆಗೆ ಧಗಧಗಿಸಿ
ತನ್ನಾವರಿಸಿದ ಸೆಳೆಯು ಮೊನಚುಗೊಂಡು
ಊರ ಸುತ್ತಲೊರಟ ಮನವು ಹಿಂತಿರುಗಿ ಬರುವುದೆಂದು
ಸೂರಿನಡಿ ನುಡಿಯುತಿದೆ ಶಕುನದ ಹಕ್ಕಿ
ಮಾತು ಮಾತಿಗೆ ಪೋಣಿಸಲು
ಹುರಿದುಂಬಿದ ಮನೆಯಲಿ
ಹನಿ ನೀರಿಗೂ ಬರಗಾಲ
ಕರಿಮಣಿಯ ಕಿತ್ತೊಗೆದ ಮಧುಮಗಳ ಬಾಳು
ಎಣ್ಣೆ ಇಲ್ಲದ ದೀಪವು ಬರ ಬರನೆ ಉರಿದು
ಮನಸ್ಸಿಲ್ಲ ಮಂಚದಲಿ ಮಲ್ಲಿಗೆಯ ಹಾಸಿ
ಕರಗುವ ಮುತ್ತು ಒಂದೆಡೆ ಸೇರಿ
ಕಣ್ಣಂಚಿನ ಕಾಡಿಗೆಗೆ ಧಗಧಗಿಸಿ
ತನ್ನಾವರಿಸಿದ ಸೆಳೆಯು ಮೊನಚುಗೊಂಡು
ಊರ ಸುತ್ತಲೊರಟ ಮನವು ಹಿಂತಿರುಗಿ ಬರುವುದೆಂದು
ಸೂರಿನಡಿ ನುಡಿಯುತಿದೆ ಶಕುನದ ಹಕ್ಕಿ
Monday 1 March, 2010
ಮಿಣಕು ಬಳ್ಳಿಯ ಸುಳಿಯಲ್ಲಿ
ಕವಿದ ಕಾರ್ಮೂಡಗಳು
ಪ್ರತಿದ್ವನಿಸಿದ ಗುಡುಗು ಮಿಂಚು
ತಳಮಳಗೊಂಡ ತಪ್ಪಿಗೆ
ಬಂಧಿಯಾದೆ
ಸೊಬಗಿನ ಕಡಲ ಕಿನಾರೆಯು
ಆರ್ಭಟಿಸಿ ಬಂದಪ್ಪಳಿಸಿದ
ರಭಸಕೆ ಎಣಿಕೆಗೆಸಿಗದಷ್ಟು
ವಸಂತ ಕಳೆದಿವೆ
ಒಡದಾಳದಲಿ ಮೂಡಿದ ಬೆಳಕು
ಬಾಹ್ಯದಲಿ ಬೀಸುತಿರುವ ತಂಗಾಳಿ
ಬಳ್ಳಿಯಂತೆ ಚಿಗುರಿದ ಕನಸು
ಆಸರೆಯ ಬೇಡುತಿದೆ
Friday 29 January, 2010
ಚಿಗುರಿತು ಬೆಳಕು
ಭುವಿಯೆಲ್ಲ ಗೆರೆಗಳು
ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು
ಭಾರವಾದ ಉಸಿರು
ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ
ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು
ನನ್ನೆಡೆಗೆ ನೋಡಿದ ಹೊಳಪು
ಹೇಗೋ ನೆರಳುಗಳ ಸೀಳಿಕೊಂಡು
ನನ್ನಲ್ಲೆಲ್ಲ ಪ್ರವಹಿಸಿ
ಪುಳಕ, ತೆನೆ ತೂಗಿದಂತೆ ಹಗುರ
ಚಲನೆ ಶುರುವಾಯಿತು
ನೆಲಬೇರುಗಳಿಗೆ ಮತ್ತೆ ಚಿಗುರು.
(ಮಂಜುನಾಥ.ಎಸ್)
ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು
ಭಾರವಾದ ಉಸಿರು
ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ
ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು
ನನ್ನೆಡೆಗೆ ನೋಡಿದ ಹೊಳಪು
ಹೇಗೋ ನೆರಳುಗಳ ಸೀಳಿಕೊಂಡು
ನನ್ನಲ್ಲೆಲ್ಲ ಪ್ರವಹಿಸಿ
ಪುಳಕ, ತೆನೆ ತೂಗಿದಂತೆ ಹಗುರ
ಚಲನೆ ಶುರುವಾಯಿತು
ನೆಲಬೇರುಗಳಿಗೆ ಮತ್ತೆ ಚಿಗುರು.
(ಮಂಜುನಾಥ.ಎಸ್)
Saturday 23 January, 2010
Thursday 21 January, 2010
ಪ್ರೀತಿಯ ನಿವೇದಿಸಿಕೊಂಡಾಗ
ತೇವಗೊಂಡ ಕಣ್ಗಳಿಂದ
ಜಾರುತಿರುವ ಹನಿಗಳ ರಭಸಕೆ
ಕೊಚ್ಚಿಹೋದ ನೂರೆಂಟು ಭಾವನೆಗಳು
ನಿವೇದಿಸಿಕೊಂಡ ಪ್ರೀತಿಯನು
ಹೃದಯದಲ್ಲಿಟ್ಟು ಕೊಳ್ಳಲೆತ್ನಿಸಿದರು
ಎದುಸಿರು ಬಂದು ಹೊರದಬ್ಬಿಹೇಳುತಿದೆ
ಇಲ್ಲಿ ಗಾಳಿಗೂ ಜಾಗವಿಲ್ಲವೆಂದು
ಹೊರದಬ್ಬಿದ ರಭಸಕೆ
ಘಾಸಿಗೊಂಡ ಮನಸ್ಸು
ಹುಚ್ಚೆದ್ದು ಓಡುವಂತೆ ಹೃದಯದ ಬಡಿತ ಹೆಚ್ಚಾಗಿ
ಮುಚ್ಚಲೆತ್ನಿಸುತಿರುವ ಕಣ್ ರಪ್ಪೆಗಳು
ಏನೂ ಹೇಳಲು ಹೊರಟ
ತುಟಿಗಳು ಅದುರಿ ಜಡಗೊಂಡಿದೆ
ನನ್ನ ಸನಿಹದಲೇ ಸುಳಿಯುತ್ತಿರುವ
ನಿನ್ನ ಕೊನೆಯುಸಿರು ಸೇರಿ
ತಲ್ಲಣಿಸುತಿದೆ
Wednesday 13 January, 2010
ನೀರೆ .....
ಮಾತಿನ ಮಂಟಪಕೆ ಕರೆದು
ಮೌನಕೆ ಶರಣಾಗಿ
ಪ್ರೀತಿಯನ್ನು ಹುದಿಗಿಸಬೇಡ
ನಿನ್ನೆಯ ಬಡತನ ಶೂಲೆಯ
ನೀಗಿಸಲು ಹೊರಟು
ಸಿರಿವಂತರ ಸುಂಟರಗಾಳಿಗೆ ಸಿಕ್ಕು
ಬಾಡಿಹೋದ ಬದುಕಲಿ
ಚಿಗುರೊಡೆದ ಪ್ರೀತಿಯನು
ಚಿವುಟ ಬೇಡ
ಕ್ಷೀಣಿಸಿದ ದೇಹವನು
ಚಲ್ಲಾಪಿಲ್ಲಿಯಾದ ಬದುಕನು
ಕಟ್ಟುವ ಚಿತ್ತದ ಮುಂದೆ
ನನ್ನ ಕಣ್ಣ ಹನಿಯು ಬೇಡುತಿದೆ
ನಿನ್ನ ದೇಹವನು ಅಪರಿಚಿತರೊಡನೆ
ಹಂಚಿಕೊಂಡಿದ್ದರೇನು
ಮನಸ್ಸು ಪವಿತ್ರವಾಗಿದೆ
ಮೌನಕೆ ಶರಣಾಗಿ
ಪ್ರೀತಿಯನ್ನು ಹುದಿಗಿಸಬೇಡ
ನಿನ್ನೆಯ ಬಡತನ ಶೂಲೆಯ
ನೀಗಿಸಲು ಹೊರಟು
ಸಿರಿವಂತರ ಸುಂಟರಗಾಳಿಗೆ ಸಿಕ್ಕು
ಬಾಡಿಹೋದ ಬದುಕಲಿ
ಚಿಗುರೊಡೆದ ಪ್ರೀತಿಯನು
ಚಿವುಟ ಬೇಡ
ಕ್ಷೀಣಿಸಿದ ದೇಹವನು
ಚಲ್ಲಾಪಿಲ್ಲಿಯಾದ ಬದುಕನು
ಕಟ್ಟುವ ಚಿತ್ತದ ಮುಂದೆ
ನನ್ನ ಕಣ್ಣ ಹನಿಯು ಬೇಡುತಿದೆ
ನಿನ್ನ ದೇಹವನು ಅಪರಿಚಿತರೊಡನೆ
ಹಂಚಿಕೊಂಡಿದ್ದರೇನು
ಮನಸ್ಸು ಪವಿತ್ರವಾಗಿದೆ
Subscribe to:
Posts (Atom)