ಗಂಜಲದಲಿ ಮನೆಯ
ತೊಳೆದು
ಬಾಗಿಲಂಗಳದಲಿ
ಸಗಣಿ ಎರಚಿ
ದೇವರ ಕೋಣೆಯಲಿ
ಬೆಣವಣ್ಣನಿಟ್ಟು
ಪೂಜಿಸಿದವಳು,
ಕೊಟ್ಟಿಗೆಯ ಸ್ವಚ್ಚಗೊಳಿಸಿ
ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು
Saturday 26 June, 2010
Saturday 19 June, 2010
ಮಣ್ಣೆಂಟೆಯೊಳು ತೆನೆ ಪೈರು
ಬಡತನದ ದೀವಿಗೆಯ ಹೊತ್ತು
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
ಕಾಮ ಕ್ರೋಧವನು ಕತ್ತಲೆಗೆ ದೂಡಿ
ಪೂಜೆ ಪುನಸ್ಕಾರವನು ಬದಿಗೊತ್ತಿ
ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು
ಕುರಿಕೆಯ ಹಿಡಿದು ಹೊರಟ ಹಸಿ ಮೈ
ಜಡಿ ಮಳೆಗೆ ಬೆವರು ಸುರಿಸಿ,
ಮಣ್ಣೆಂಟೆ ಕಳೆಗಳನು ಬಡಿದು
ಬಡ ಬಗ್ಗರ ಬದುಕ ಕಟ್ಟಿ
ಮೊಳಕೆಯೊಡೆವ ಮೊದಲೆ
ತನ್ನಾಳುವ ಅರಸನ ಕೈಗೆ ಸಿಕ್ಕು
ಮೇಣಿಯ ಹಾಲನು ಕುಡಿದು
ನೇಗಿಲ ಯೋಗಿಯಾಗಿರುವೆ.
Friday 11 June, 2010
ಕಾಲವನ್ನು ಸರಿಸಿ
ಕರಗಿದ ಮುತ್ತು
ಒಗ್ಗೂಡಿ
ಮರು ಹುಟ್ಟು.
ನೋವು ಹುದುಗಿಸಿಟ್ಟು
ಅವಳಿಗಾಗಿ ಕಾಯುವ ಕಾಲ
ನನ್ನ ಮುಂದೆ ನಶ್ವರ
Saturday 5 June, 2010
ಕೃತಿಗೆ ಸಿಗದ ಪ್ರಕೃತಿ
ಅರೆ ಬರೆ ಅಕ್ಷರವ ಗೀಚುತ
ಮಾರುದ್ದ ಮಾಲೆಯ ತೂಗಿಕೊಂಡು
ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,
ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ
ಓರೆ-ಕೋರೆಗಳನು ತಿದ್ದಲೊರಟು
ಪಾಪ ಪರಿವರ್ತನೆಯೆಂಬ
ಮೂಡನಂಬಿಕೆಗೆ ಸೆಣೆದು
ಪರಲೋಕ ಕಲ್ಯಾಣಕ್ಕಾಗಿ ಗದ್ದುಗೆಯೊಳಗಿಳಿದು
ಅಸ್ಪ್ರುಶ್ಯತೆಗೆ ಜನ್ಮ ನೀಡಿ
ಜಗವೆಲ್ಲ ನನ್ನದೆನ್ನುವವನ
ಬುದ್ದಿಯೊಳ ಬುದ್ದಿಯನು
ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ
Subscribe to:
Posts (Atom)